ಯೋಬ 11:1-20

  • ಚೋಫರನ ಮೊದಲ ಮಾತುಗಳು (1-20)

    • ಟೊಳ್ಳು ಮಾತುಗಳನ್ನ ಆಡ್ತಿದ್ದಾನೆ ಅಂತ ಆರೋಪ (2, 3)

    • ಕೆಟ್ಟತನ ಬಿಟ್ಟುಬಿಡೋಕೆ ಯೋಬನಿಗೆ ಸಲಹೆ (14)

11  ಆಗ ನಾಮಾಥ್ಯನಾದ ಚೋಫರ+ ಹೀಗಂದ:   “ನೀನು ಬಾಯಿಗೆ ಬಂದಿದ್ದೆಲ್ಲ ಮಾತಾಡ್ತಾ ಇದ್ರೆ ಯಾರೂ ಏನೂ ಹೇಳಲ್ಲ ಅಂದ್ಕೊಂಡಿದ್ದೀಯಾ? ತುಂಬ ಮಾತಾಡಿದ್ರೆ* ನೀನೇ ಸರಿ ಅಂತ ಆಗಿಬಿಡುತ್ತಾ?   ನಿನ್ನ ಟೊಳ್ಳು ಮಾತುಗಳಿಂದ ಜನ್ರ ಬಾಯಿ ಮುಚ್ಚಿಸ್ತೀಯಾ? ಬೇರೆಯವ್ರನ್ನ ತಮಾಷೆ ಮಾಡಿದ್ರೆ ನಿನಗ್ಯಾರೂ ಬೈಯಲ್ವಾ?+   ‘ನಾನು ಕಲಿಸೋದೆಲ್ಲ ಸರಿ,+ದೇವರ ದೃಷ್ಟಿಯಲ್ಲಿ ನಾನೇನೂ ತಪ್ಪು ಮಾಡಿಲ್ಲ’ ಅಂತ ಹೇಳಿದ್ಯಲ್ಲಾ.+   ಆದ್ರೆ ದೇವರೇ ಬಾಯಿ ಬಿಟ್ಟು ನಿನ್ನ ಜೊತೆ ಮಾತಾಡಿದ್ರೆವಿಷ್ಯ ಹೊರಗೆ ಬರುತ್ತೆ!+   ಆತನು ನಿನ್ನ ಮುಂದೆ ವಿವೇಕದ ಗುಟ್ಟುಗಳನ್ನ ಬಿಚ್ಚಿಡ್ತಾನೆ,ಯಾಕಂದ್ರೆ ಬುದ್ಧಿಯಿಂದ ಕೆಲಸ ಮಾಡಿದ್ರೆ ತುಂಬ ಪ್ರಯೋಜನ ಸಿಗುತ್ತೆ. ನೀನು ಮಾಡಿರೋ ಕೆಲವು ತಪ್ಪನ್ನ ದೇವರು ಮರೆತುಬಿಟ್ಟಿದ್ದಾನೆ ಅಂತ ಆಗ ನಿನಗೆ ಗೊತ್ತಾಗುತ್ತೆ.   ದೇವರ ಬಗ್ಗೆ ಜನ್ರಿಗೆ ಅರ್ಥ ಆಗದಿರೋ ವಿಷ್ಯಗಳನ್ನ ನಿನ್ನಿಂದ ಕಂಡುಹಿಡಿಯೋಕೆ ಆಗುತ್ತಾ? ಸರ್ವಶಕ್ತನ ಬಗ್ಗೆ ಪೂರ್ತಿ ತಿಳ್ಕೊಳ್ಳೋಕೆ ಆಗುತ್ತಾ?   ಆತನ ವಿವೇಕ ಆಕಾಶಕ್ಕಿಂತ ಎತ್ತರ. ನಿನಗೆ ಹೇಗೆ ತಿಳ್ಕೊಳ್ಳೋಕೆ ಆಗುತ್ತೆ? ಸಮಾಧಿಗಿಂತಲೂ* ಆಳ. ನಿನಗೆ ಹೇಗೆ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ?   ಅದು ಭೂಮಿಗಿಂತ ದೊಡ್ಡದು,ಸಮುದ್ರಕ್ಕಿಂತ ವಿಶಾಲ. 10  ದೇವರು ಯಾರನ್ನಾದ್ರೂ ಬಂಧಿಸಿ ನ್ಯಾಯಾಲಯಕ್ಕೆ ಕರ್ಕೊಂಡು ಬಂದ್ರೆಅದನ್ನ ತಡಿಯಕ್ಕಾಗುತ್ತಾ? 11  ಯಾಕಂದ್ರೆ ಮನುಷ್ಯರು ಮೋಸ ಮಾಡಿದ್ರೆ ದೇವರಿಗೆ ಗೊತ್ತಾಗುತ್ತೆ. ಕೆಟ್ಟದು ಮಾಡ್ತಿದ್ರೆ ಆತನು ನೋಡಿನೂ ನೋಡದ ಹಾಗೆ ಇರ್ತಾನಾ? 12  ಕಾಡುಕತ್ತೆಗೆ ಮನುಷ್ಯ ಹುಟ್ಟಲ್ಲ,*ಅದೇ ತರ ಮೂರ್ಖನಿಗೆ ಬುದ್ಧಿ ಬರಲ್ಲ. 13  ನೀನು ನಿನ್ನ ಹೃದಯ ಶುದ್ಧ ಮಾಡ್ಕೊಂಡ್ರೆ,*ನಿನ್ನ ಕೈಗಳನ್ನ ಎತ್ತಿ ಪ್ರಾರ್ಥಿಸಿದ್ರೆ, 14  ಮಾಡ್ತಾ ಇರೋ ತಪ್ಪನ್ನ ಬಿಟ್ಟುಬಿಟ್ರೆ,ಇನ್ನು ಮುಂದೆ ನಿನ್ನ ಡೇರೆಗಳಲ್ಲಿ ಕೆಟ್ಟ ಕೆಲಸ ನಡಿಯದ ಹಾಗೆ ನೋಡ್ಕೊಂಡ್ರೆ 15  ನಿನ್ನಲ್ಲೇನೂ ತಪ್ಪಿರಲ್ಲ, ಆಗ ನೀನು ತಲೆಯೆತ್ತಿ ನಡಿಬಹುದು,ಭಯ ಇಲ್ಲದೆ ನೆಟ್ಟಗೆ ನಿಲ್ಲಬಹುದು. 16  ನಿನ್ನ ಕಷ್ಟಗಳನ್ನೆಲ್ಲ ಮರೆತುಬಿಡ್ತೀಯ,ನೀರಿನ ತರ ಕಷ್ಟಗಳೆಲ್ಲ ಹರಿದು ಹೋಗುತ್ತೆ. 17  ನಿನ್ನ ಬದುಕಲ್ಲಿ ಮಧ್ಯಾಹ್ನಕ್ಕಿಂತಲೂ ಜಾಸ್ತಿ ಬೆಳಕಿರುತ್ತೆ,ರಾತ್ರಿ ಕೂಡ ಹಗಲಿನ ತರ ಇರುತ್ತೆ. 18  ನಿನಗೆ ನಿರೀಕ್ಷೆ ಇರೋದ್ರಿಂದ ಯಾವ ಭಯನೂ ಇರಲ್ಲ,ನಿನ್ನ ಸುತ್ತ ಅಪಾಯ ಇಲ್ಲದೇ ಇರೋದ್ರಿಂದ ಆರಾಮವಾಗಿ ನಿದ್ದೆ ಮಾಡ್ತೀಯ. 19  ನೀನು ಮಲಗಿದ್ದಾಗ ಯಾರೂ ನಿನ್ನನ್ನ ಹೆದರಿಸಲ್ಲ,ತುಂಬ ಜನ ಬಂದು ನಿನ್ನ ಸಹಾಯ ಕೇಳ್ತಾರೆ. 20  ಆದ್ರೆ ಕೆಟ್ಟವ್ರಿಗೆ ಕಣ್ಣು ಮಂಜಾಗುತ್ತೆ,ತಪ್ಪಿಸ್ಕೊಂಡು ಹೋಗೋಕೆ ಅವ್ರಿಗೆ ದಾರಿನೇ ಕಾಣಲ್ಲ,ಅವ್ರಿಗೆ ಸಾವು ಬಿಟ್ರೆ ಬೇರೆ ದಾರಿನೇ ಇಲ್ಲ.”+

ಪಾದಟಿಪ್ಪಣಿ

ಅಥವಾ “ಕೊಚ್ಕೊಂಡ್ರೆ.”
ಅಥವಾ “ಕಾಡುಕತ್ತೆ ಮನುಷ್ಯನಾಗಿ ಹುಟ್ಟಲ್ಲ.”
ಅಥವಾ “ಸಿದ್ಧ ಮಾಡ್ಕೊಂಡ್ರೆ.”